Posts

Showing posts from June, 2008

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ಸಾಹಿತ್ಯ: ಎಂ.ಎನ್.ವ್ಯಾಸರಾವ್ ಸಂಗೀತ: ಸಿ.ಅಶ್ವತ್ಥ್ ಹಿನ್ನಲೆ ಗಾಯನ: ರತ್ನಮಾಲಾ ಪ್ರಕಾಶ್ ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನೆದೆಯ ಕಡಲೇಕೆ ಬೀಗುತಿಹುದು ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನೆದೆಯ ಕಡಲೇಕೆ ಬೀಗುತಿಹುದು ಸೂಜುಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ ಗರಿಗೆದರೆ ಕನಸುಗಳು ಕಾಡುತಿಹುದು ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ ಜೀವ ನಿನ್ನಾಸರೆಗೆ ಕಾಯುತಿಹುದು ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ.... ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ ನಡುವೆ ಮೈಚಾಚಿರುವ ವಿರಹದಡವು ಯಾವ ದೋಣಿಯು ತೇಲಿ ಎಂದು ಬರುವಿದೊ ಕಾಣೆ ನೀನಿರುವ ಬಳಿಯಲ್ಲಿ ನನ್ನ ಬಿಡಲು ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ...

ಬಿಸಿಲಾದರೇನು ಮಳೆಯಾದರೇನು...

ಚಿತ್ರ: ಬೆಂಕಿಯ ಬಲೆ ರಚನೆ: ರಾಜನ್-ನಾಗೇಂದ್ರ ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ ಬಿಸಿಲಾದರೇನು ಮಳೆಯಾದರೇನು ಎಂದೂ ನಾನಿಲ್ಲವೇನು ನೀ ನನ್ನ ಜೀವಾ ಎಂದಿಗೂ ಹೂವು ಹಾವಾದರೇನು ಹಾಲು ವಿಷವಾದರೇನು ಹೂವು ಹಾವಾದರೇನು ಹಾಲು ವಿಷವಾದರೇನು ಈ ನಿನ್ನ ನೋಟ ಬೆರೆತಾಗ ಮುಳ್ಳು ಹೂವಾಗಿ ಅರಳದೇನು ಭುವಿಯೇ ಬಾಯ್ಬಿಟ್ಟರೇನು ಸಿಡಿಲೆ ಎದುರಾದರೇನು ನನ್ನಾಣೆ ನಲ್ಲೆ ನಾ ನಿನ್ನ ಬಿಡೆನು ಪ್ರಾಣಕ್ಕೆ ಪ್ರಾಣ ಕೊಡುವೆ ಕಂಬನಿ ಮಿಡಿಯದೇ ಇನ್ನು ನಗಲಾರೆಯೇನು ಬಿಸಿಲಾದರೇನು ಮಳೆಯಾದರೇನು... ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು ಈ ಬಾಳು ಇನ್ನು ಹೋರಾಟ ತಾನೇ ಬಿಡು ಇನ್ನು ಚಿಂತೆಯನ್ನು ಯಾರೇನು ಅಂದರೇನು ಊರೇ ಎದುರಾದರೇನು ಕೊನೆತನಕ ನಾನು ಹೋರಾಡಿ ಗೆಲುವೆ ನಿನ್ನನ್ನು ನಾನು ಬಿಡೆನು ಕೊರಗದೆ ನಡುಗದೆ ನಲ್ಲೆ ನಗಲಾರೆಯೇನು ಬಿಸಿಲಾದರೇನು ಮಳೆಯಾದರೇನು...

ಈ ಭಾವಗೀತೆ ನಿನಗಾಗಿ ಹಾಡಿದೆ

ಚಿತ್ರ: ಒಂದೇ ಗುರಿ ರಚನೆ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ ಈ ಭಾವಗೀತೆ ನಿನಗಾಗಿ ಹಾಡಿದೆ ಅನುರಾಗ ನನ್ನನು ಕವಿಯಾಗಿ ಮಾಡಿದೆ ಈ ಭಾವಗೀತೆ ನಿನಗಾಗಿ ಹಾಡಿದೆ ಈ ಭಾವಗೀತೆ ನಿನಗಾಗಿ ಹಾಡಿದೆ ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ ಎಲ್ಲೆಲ್ಲಿ ನೊಡಿದರಲ್ಲಿ ಹೊಸ ಹಸಿರು ತುಂಬಿದೆ ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲಾ ತೋಳಿoದ ನನ್ನನು ಬಳಸಿ ನೀ ಸನಿಹ ನಿಂತಿರೇ ನಿನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು ಈ ಭಾವಗೀತೆ ನಿನಗಾಗಿ ... ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ ಆಸೆಗಳ ಕಣ್ಣು ತುಂಬಿ ಮೋಹವನು ತುಂಬಿ ತುಂಬಿ ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ ಹೀಗೇಕೆ ನೀ ಮೌನವಾದೆ ಕಾರಣ ಹೇಳದೇ ಈ ಭಾವಗೀತೆ ನಿನಗಾಗಿ...